- November 30, 2021
ಕಿಚ್ಚಿನ ಬಗ್ಗೆ ರಶ್ಮಿಕಾ ಮಾತಿನ ಹಿಂದಿನ ತಾತ್ಪರ್ಯವೇನು..?!

ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಾಗಿರದೆ ಇಡೀ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ನಟಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ಕಾರಣಕ್ಕೆ ಸದ್ದುಮಾಡುತ್ತಲೇ ಇರುತ್ತಾರೆ.

ಇದೀಗ ಬೆಂಕಿ, ಕಿಚ್ಚಿನ ಬಗ್ಗೆ ಮಾತನಾಡಿದ್ದಾರೆ. ಹೌದು ರಶ್ಮಿಕಾ ಅವರು ಅಭಿಮಾನಿಗಳಿಗೆ ಭಯವನ್ನು ಎದುರಿಸುವುದರ ಬಗ್ಗೆ ಟಿಪ್ಸ್ ನೀಡಿದ್ದಾರೆ.
ನಿಮ್ಮ ಪ್ರಕಾರ ಕಿಚ್ಚು ಎಂದರೇನು ಹೋಲಿಕೆಯೇ? ಆತಂಕವೇ ? ಎಂದು ಬರೆದುಕೊಂಡಿದ್ದಾರೆ. ಧೈರ್ಯ ಇದ್ದವರು ಏನನ್ನಾದರೂ ಗೆಲ್ಲಬಹುದು. ನೀವೂ ಮಾಡಬಹುದು. ನಾನೂ ಸಹ ಈ ಹಿಂದೆ ಧೈರ್ಯದಿಂದ ಇದ್ದೆ. ಆದರೆ ನಾನು ಅದನ್ನು ಬಿಟ್ಟು ಮುಂದೆ ಬಂದೆ. ಇನ್ನು ಮುಂದೆಯೂ ಹೀಗೆ ಮಾಡುತ್ತೇನೆ.

ಈ ರೀತಿ ಧೈರ್ಯದಿಂದ ಇರಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.