- November 25, 2021
ಅಂಬಿ ಕಾಯಕ ಪ್ರಶಸ್ತಿ ನೀಡಿದ ಚಾಲೆಂಜಿಂಗ್ ಸ್ಟಾರ್


ಅಂಬಿ ಅಭಿಮಾನಿಗಳನ್ನ ಅಗಲಿ ಮೂರು ವರ್ಷ ಕಳೆದಿದೆ..ರೆಬೆಲ್ ಸ್ಟಾರ್ ಜೀವಂತ ಇಲ್ಲ ಆದ್ರೆ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿದ್ದಾರೆ…ಡಾ. ಅಂಬರೀಷ್ ಅವರ ನೆನಪನ್ನು ಸದಾ ಜೀವಂತವಿಟ್ಟು, ಅದನ್ನು ಪೋಷಿಸಿ ಬೆಳಸುತ್ತಿರುವವರು ಅವರ ಅಭಿಮಾನಿಗಳು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ‘ಅಂಬಿ ಕಾಯಕ ಪ್ರಶಸ್ತಿ’ಯನ್ನು ಸ್ಥಾಪಿಸಿ ನಾನಾ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು…

ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿದ ದರ್ಶನ್. ಅಭಿಶೇಕ್ ಹಾಗೂ ಸುಮಲತಾ ಹಿರಿಯ ನಟರಾದ ದೊಡ್ಡಣ್ಣ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಡಾ. ಅಂಬರೀಷ್ ಅಭಿಮಾನಿ ಸಂಘದ ಮುಖಂಡರು, ಅಭಿಮಾನಿಗಳು ಮತ್ತು ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗಿ ಆಗಿ ಪ್ರಶಸ್ತಿ ಪ್ರಧಾನ ಮಾಡಿದ್ರು….

